Download Now Banner

This browser does not support the video element.

ಸಂಡೂರು: ದೋಣಿಮಲೈ ಪಟ್ಟಣದಲ್ಲಿ ಅನುಮತಿ ಇಲ್ಲದೆ ಡಿಜೆ ಬಳಕೆ, ಕೇಸ್ ದಾಖಲು

Sandur, Ballari | Sep 1, 2025
ಸಂಡೂರು ತಾಲೂಕಿನ ದೋಣಿಮಲೈ ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ಅನುಮತಿ ಪಡೆಯದೇ ಡಿಜೆ ಬಳಕೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.ಆಗಸ್ಟ್ 31, ಭಾನುವಾರ ಸಂಜೆ 7 ಗಂಟೆ ನಡೆದ ವಿಸರ್ಜನೆ ಕಾರ್ಯಕ್ರಮದಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಧ್ವನಿ ವರ್ಧಕಗಳನ್ನು (ಡಿಜೆ) ಬಳಸಿದ ಹಿನ್ನೆಲೆಯಲ್ಲಿ ಆಯೋಜಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಇದರೊಂದಿಗೆ ಕಾರ್ಯಕ್ರಮದಲ್ಲಿ ಬಳಸಲಾದ ಡಿಜೆ ಮತ್ತು ವಾಹನಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಜನಸಾಮಾನ್ಯರ ಶಾಂತಿ ಭದ್ರತೆ ಕಾಪಾಡುವ ದೃಷ್ಟಿಯಿಂದ ಅಧಿಕಾರಿಗಳು ಇಂತಹ ಕ್ರಮ ಕೈಗೊಂಡಿದ್ದಾರೆ. ಎನ್ನಲಾಗಿದೆ
Read More News
T & CPrivacy PolicyContact Us