Download Now Banner

This browser does not support the video element.

ರಾಯಚೂರು: ಶ್ರಾವಣ ಮಾಸದ ಕೊನೆ ದಿನ ಕಸ್ಬೆ ಕ್ಯಾಂಪ್‌ ಬಳಿ ಭೀಕರ ರಸ್ತೆ ಅಪಘಾತ, ವೃದ್ಧನ ಸ್ಥಿತಿ ಗಂಭೀರ, ನಾಲ್ವರಿಗೆ ಗಾಯ

Raichur, Raichur | Aug 23, 2025
ತಾಲೂಕಿನ ಕಸ್ಬೆ ಕ್ಯಾಂಪ್ ಬಳಿ ಲಾರಿ ಮತ್ತು ಕಾರು ನಡುವೆ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ವೃದ್ಧರೊಬ್ಬರ ಸ್ಥಿತಿ ಗಂಭೀರವಾಗಿದ್ದು, ನಾಲ್ವರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಆಗಸ್ಟ್ 22ರ ಶುಕ್ರವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದವರು ಕಲ್ಲೂರು ಗ್ರಾಮದವರು ಎನ್ನಲಾಗಿದ್ದು, ರಾಯಚೂರಿಗೆ ಹೊರಟಿದ್ದಾಗ ಅವಘಡ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಸರ್ದಾರ್ ಸಾಬ್ (72) ಎಂದು ತಿಳಿದು ಬಂದಿದ್ದು, ರಾಯಚೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
Read More News
T & CPrivacy PolicyContact Us