Download Now Banner

This browser does not support the video element.

ಹನೂರು: ಪೆದ್ದನಪಾಳ್ಯ ಸರಕಾರಿ ಶಾಲೆ ಜಾಗದ ಸಮಸ್ಯೆ: ನ್ಯಾಯಾಧೀಶರಾದ ಶ್ರೀಕಾಂತ್ ಮತ್ತು ಸುನಿತಾ ಭೇಟಿ

Hanur, Chamarajnagar | Aug 30, 2025
ಹನೂರುತಾಲೂಕಿನ ಪೆದ್ದನಪಾಳ್ಯ ಗ್ರಾಮದ ಸರಕಾರಿ ಶಾಲೆಗೆ ನ್ಯಾಯಾಧೀಶರಾದ ಶ್ರೀಕಾಂತ್ ಮತ್ತು ಸುನಿತಾ ರವರು ಶನಿವಾರದಂದು ಭೇಟಿ ನೀಡಿದರು. ಈ ಶಾಲೆಯ ಜಾಗದ ಕುರಿತು ಮಾರ್ಕಂಡ ಎಂಬುವವರು ದಾವೆ ಹಾಕಿದ್ದರಿಂದ, ಅದು ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿದೆ. ಶಾಲಾ ಆವರಣದಲ್ಲಿ ಗಿಡಿಗಂಟಿಗಳು ಬೆಳೆಯುತ್ತಿದ್ದು, ಅವನ್ನು ತೆರವುಗೊಳಿಸಲಾಗಿಲ್ಲ. ಇದರಿಂದ ಶಾಲೆ ಮಾಲೀಕತ್ವದ ಜಾಗದ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ. ಅಲ್ಲದೆ ಶಾಲೆಯಲ್ಲಿ ಕುಡಿಯುವ ನೀರು ಮತ್ತು ಶೌಚಗೃಹದ ವ್ಯವಸ್ಥೆ ಲಭ್ಯವಿಲ್ಲ, ಇದರಿಂದ ಮಕ್ಕಳಿಗೆ ದೊಡ್ಡ ಸಂಕಟ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಬೇಸತ್ತಿರುವ ಪಾಲಕರು ಆ.11ರಿಂದ 9ದಿನಗಳ ಕಾಲ ಮಕ್ಕಳನ್ನು ಶಾಲೆಗೆ ಕಳುಹಿಸದೆ ಪ್ರತಿಭಟನೆ ನಡೆಸಿದ್ದರು.
Read More News
T & CPrivacy PolicyContact Us