ಧರ್ಮಸ್ಥಳದಲ್ಲಿ ಎಸ್.ಐ.ಟಿ ರಚನೆ ಸರ್ಕಾರದ ಮೂರ್ಖತನದ ಪರಮಾವಧಿ: ನಗರದಲ್ಲಿ ಮಾಜಿ ಸಚಿವ ಬಿಸಿ ಪಾಟೀಲ್ ಧರ್ಮಸ್ಥಳದಲ್ಲಿ ಎಸ್.ಐ.ಟಿ ರಚನೆ ಮಾಡಿದ್ದು ಸರ್ಕಾರದ ಮೂರ್ಖತನದ ಪರಮಾವಧಿ ಎಂದು ಮಾಜಿ ಸಚಿವ ಬಿಸಿ ಪಾಟೀಲ್ ಕಿಡಿ ಕಾರಿದರು. ದಾವಣಗೆರೆ ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಧರ್ಮಸ್ಥಳ ದ ವಿಚಾರದಲ್ಲಿ ಸರ್ಕಾರ ಷಡ್ಯಂತ್ರ ನಡೆಸಿದೆ. ಇದು ಹಿಂದೂ ಧರ್ಮದ ಮೇಲೆ ಮಾಡಿರುವ ದಾಳಿ. ಮೂರ್ಖತನದ ಪರಮಾವಧಿ ಸರ್ಕಾರ ಎಸ್ ಐ ಟಿ ತನಿಖೆ ಮಾಡಿದ್ದು ಎಂದರು.