Download Now Banner

This browser does not support the video element.

ಹನೂರು: ಅಂತೂ ಇಂಡಿಗನತ್ತಕ್ಕೆ ಒಲಿದ ಬಿಎಸ್‌ಎನ್ಎಲ್ ಟವರ್ ಭಾಗ್ಯ:ನಿರ್ಮಾಣಕ್ಕೆ ನಿವೇಶನ ಹಸ್ತಾಂತರ

Hanur, Chamarajnagar | Sep 1, 2025
ಹನೂರು,:ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಇಂಡಿಗನತ್ತ ಗ್ರಾಮದಲ್ಲಿ ಬಹುಕಾಲದಿಂದ ಮೊಬೈಲ್ ಸಂಪರ್ಕದ ಕೊರತೆಯಿಂದ ಸಂಕಷ್ಟದಲ್ಲಿದ್ದ ಗ್ರಾಮಸ್ಥರಿಗೆ ಶೀಘ್ರದಲ್ಲೇ ಪರಿಹಾರ ದೊರೆಯಲಿದೆ. ಜಿಲ್ಲಾಧಿಕಾರಿಗಳಾದ ಸಿ.ಟಿ. ಶಿಲ್ಪಾ ನಾಗ್ ಅವರ ಆದೇಶದಂತೆ, ಬಿಎಸ್‌ಎನ್ಎಲ್ ಮೊಬೈಲ್ ಟವರ್ ನಿರ್ಮಾಣಕ್ಕಾಗಿ ಸರ್ಕಾರದ ನಿವೇಶನವನ್ನು ಗುರುತಿಸಿ ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಲಾಗಿದೆ.ಈ ಈ ಕುರಿತು ರಾಜಸ್ವ ನಿರೀಕ್ಷಕ ಶಿವಕುಮಾರ್ ಮಾತನಾಡಿ, ಇಂಡಿಗನತ್ತ ಗ್ರಾಮದಲ್ಲಿ ತುರ್ತು ಪರಿಸ್ಥಿತಿಗಳಲ್ಲಿ ಸಂಪರ್ಕ ಕೊರತೆಯಿಂದ ಜನತೆ ಬಹಳ ತೊಂದರೆ ಅನುಭವಿಸುತ್ತಿದ್ದರು. ಈಗ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ, ಮೊಬೈಲ್ ಟವರ್ ನಿರ್ಮಾಣಕ್ಕೆ ಸರಿಯಾದ ಸ್ಥಳವನ್ನು ಗುರುತಿಸಲಾಗಿದೆ ಎಂದರು
Read More News
T & CPrivacy PolicyContact Us