Download Now Banner

This browser does not support the video element.

ತುಮಕೂರು: ಜಾತ್ಯತೀತ, ಪಕ್ಷಾತೀತವಾಗಿ ತುಮಕೂರು ದಸರಾ ವಿಜೃಂಭಣೆಯಿಂದ ನಡೆಸಲು ಜಿಲ್ಲಾಡಳಿತ ಸಜ್ಜು :ನಗರದಲ್ಲಿ ಸಚಿವ ಪರಮೇಶ್ವರ್

Tumakuru, Tumakuru | Sep 8, 2025
ಜಾತ್ಯತೀತ ಹಾಗೂ ಪಕ್ಷಾತೀತವಾಗಿ ತುಮಕೂರು ದಸರಾವನ್ನ ವಿಜೃಂಭಣೆಯಿಂದ ನಡೆಸಲು ಜಿಲ್ಲಾಡಳಿತ ಸನ್ನದ್ದವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.ಅವರು ತುಮಕೂರು ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಸೋಮವಾರ ಮಧ್ಯಾನ 12:30 ರ ಸಮಯದಲ್ಲಿ ತುಮಕೂರು ದಸರಾ ಲಾಂಛನವನ್ನು ಬಿಡುಗಡೆ ಮಾಡಿ ಮಾತನಾಡಿದರು. ಮೈಸೂರು ಮಾದರಿಯಲ್ಲೇ ತುಮಕೂರು ದಸರಾ ವನ್ನಾ ಯಶಸ್ವಿಗೊಳಿಸಲು ಜಿಲ್ಲೆಯ ಜನತೆ ಹಾಗೂ ರಾಜಕಾರಣಿಗಳು ಸಹಕಾರ ನೀಡಬೇಕು.ಜಿಲ್ಲೆಯ ಹಲವು ಕಲಾವಿದರಿಗೆ ಮೈಸೂರು ದಸರಾದಲ್ಲಿ ಭಾಗವಹಿಸುವ ಅವಕಾಶ ಸಿಗುವುದಿಲ್ಲ ಹಾಗಾಗಿ ತುಮಕೂರಿನಲ್ಲಿ ಅವರಿಗೆ ಅವಕಾಶ ಕಲ್ಪಿಸಿ ಕೊಡೋಣ ಎಂದರು.
Read More News
T & CPrivacy PolicyContact Us