Download Now Banner

This browser does not support the video element.

ತುಮಕೂರು: ಘೋಷಣೆಯಾಗಿದ್ದ ಸಚಿವ ಸ್ಥಾನ ಕೈತಪ್ಪಿ ಹೋಗಿದ್ದಕ್ಕೆ ಬೇಸರವಿದೆ : ನಗರದಲ್ಲಿ ತಿಪಟೂರು ಶಾಸಕ ಷಡಕ್ಷರಿ ಹೇಳಿಕೆ

Tumakuru, Tumakuru | Aug 31, 2025
ಸಿಎಂ ಸಿದ್ದರಾಮಯ್ಯ ಅವರು ಕಳೆದ ಬಾರಿಯೇ ನನಗೆ ಸಚಿವ ಸ್ಥಾನ ಘೋಷಣೆ ಮಾಡಿದ್ರು ಯಾವುದೋ ಒಂದು ಕಾರಣಕ್ಕೆ ಕೈ ತಪ್ಪಿ ಹೋಯಿತು ಎಂದು ತಿಪಟೂರು ವಿಧಾನಸಭಾ ಕ್ಷೇತ್ರದ ಶಾಸಕ ಷಡಕ್ಷರಿ ಬೇಸರ ವ್ಯಕ್ತಪಡಿಸಿದರು.ತುಮಕೂರು ನಗರದ ಜೆಸಿ ರಸ್ತೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ತುಮಕೂರು ತಾಲ್ಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ತುಮಕೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಮಾವೇಶ ಹಾಗೂ ಅಭಿನಂದನಾ ಸಮಾರಂಭ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾನುವಾರ ಮಧ್ಯಾಹ್ನ 1 ರ ಸಮಯದಲ್ಲಿ ಮಾತನಾಡಿದರು. ಸಚಿವ ಸ್ಥಾನ ಸಿಗದಿದ್ದಕ್ಕೆ ನನಗೆ ಬೇಸರವಿಲ್ಲ ನಾನು ಸ್ವಾಭಿಮಾನಿ ನಾನಾಗಿಯೇ ಏನನ್ನು ಕೇಳುವುದಿಲ್ಲ ಎಂದರು.
Read More News
T & CPrivacy PolicyContact Us