Download Now Banner

This browser does not support the video element.

ತುಮಕೂರು: ನಗರದಲ್ಲಿ ಈದ್ ಮಿಲಾದ್ ಸಂಭ್ರಮಾಚರಣೆ : ಚಾಮ್ನಿ ಮೆರವಣಿಗೆಗೆ ಮುಖಂಡರಿಂದ ಚಾಲನೆ

Tumakuru, Tumakuru | Sep 5, 2025
ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಮುಖಂಡರ ನೇತೃತ್ವದಲ್ಲಿ ಚಾಮ್ನಿ ಮೆರವಣಿಗೆಯು ತುಮಕೂರು ನಗರದ ಗೂಡ್ಸ್ ಶೆಡ್ ಕಾಲೋನಿಯ ಮೀನಾ ಮಸೀದಿಯಿಂದ ಆರಂಭವಾಯಿತು.ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್, ಮಾಜಿ ಶಾಸಕ ಶಫಿ ಅಹ್ಮದ್, ಡಿ ವೈ ಎಸ್ ಪಿ ಚಂದ್ರಶೇಖರ್ ಅವರುಗಳು ಮೆರವಣಿಗೆಗೆ ಚಾಲನೆ ನೀಡಿದರು. ಶುಕ್ರವಾರ ಮಧ್ಯಾಹ್ನ 1.30 ರ ಸಮಯದಲ್ಲಿ ನಮಾಜ್ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಈ ವೇಳೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ, ಯಾರೆಲ್ಲ ಇಸ್ಲಾಂ ಧರ್ಮದ ಗುಣಗಳನ್ನ ಅಳವಡಿಸಿಕೊಳ್ಳುತ್ತಾರೋ ಅವರೆಲ್ಲರೂ ಶಾಂತಿ ಪ್ರಿಯರಾಗಿರುತ್ತಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಇನಾಯತ್ ಉಲ್ಲಾ ಖಾನ್ ಸಹ ಮಾತನಾಡಿದರು.
Read More News
T & CPrivacy PolicyContact Us