ಚಿಕ್ಕಬಳ್ಳಾಪುರ ನಗರದ ಎಚ್ಎಸ್ ಗಾರ್ಡ್ ನಲ್ಲಿನ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಗಣಪತಿ ಮೂರ್ತಿಯ ಪ್ರತಿಷ್ಠಾಪನೆಯನ್ನು ಮಾಡಲಾಗಿದೆ. ಈ ಬಳಗದ ವತಿಯಿಂದ ಗಣಪತಿಯ ಲಡ್ಡುವಿನ ಹರಾಜು ಪ್ರಕ್ರಿಯೆಯು ಇಂದು ನಡೆದಿದ್ದು 21 ಕೆಜಿಯ ಲಡ್ಡುವಿಗೆ ಬರೋಬ್ಬರಿ 75ಸಾವಿರಕ್ಕೆ ಹರಾಜು ಆಗಿದೆ. ಮುನಿರಾಜು ಮತ್ತು ವೆಂಕರಾಜು ಎಂಬುವವರು ಹರಾಜು ಕೂಗಿದ್ದು, ಇದೇ ರೀತಿಯಲ್ಲಿ ಪ್ರತಿ ವರ್ಷವೂರಿಂದ ಈ ಕಾರ್ಯಕ್ರಮ ನಡೆಯಲಿ ಎಂದು ಅವರು ಶುಭ ಕೋರಿದ್ದಾರೆ.