ತಾಲೂಕಿನ ಡೊಂಗ ರಾಂಪುರದಿಂದ ಯರಗುಂಟ , ಸಗಮಕುಂಟ , ಶಾಖವಾದಿ ಹಾಗೂ ಪಲಕಂದೊಡ್ಡಿ ಮೂಲಕ ಹೋಗುವ ರಸ್ತೆ ಕೆಸರು ಗದ್ದೆಯಂತಾಗಿದ್ದು , ಪಿಡಬ್ಲ್ಯುಡಿ ಅಧಿಕಾರಿಗಳಿಗೆ ನಾಚಿಕೆ , ಮಾನ , ಮರ್ಯಾದೆ ಎಂಬುದಿದ್ದರೆ ಕೂಡಲೇ ಭೇಟಿ ನೀಡಿ ರಸ್ತೆ ಸರಿಪಡಿಸಬೇಕು ಎಂದು ಕಲ್ಯಾಣ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ರಂಗನಾಥ ಕಿಡಿಕಾರಿದ್ದಾರೆ . ಈ ಕುರಿತು ಶನಿವಾರ ಪ್ರಕಟಣೆ ನೀಡಿದ ಅವರು , ಮಳೆ ಬಂದಿದ್ದು , ರಸ್ತೆ ಎಲ್ಲಾ ಹಾಳಾಗಿದೆ . ಪಕ್ಕದಲ್ಲೇ ಗ್ರಾಮ ಪಂಚಾಯತಿ ಕಟ್ಟಡವಿದೆ . ಇದೇ ರಸ್ತೆಯಲ್ಲಿ ಶಾಲಾ ಮಕ್ಕಳನ್ನು ಹೊತ್ತೊಯ್ಯುವ ವಾಹನಗಳು ಚಲಿಸುತ್ತವೆ . ಏನಾದರೂ ಹೆಚ್ಚು ಕಮ್ಮಿಯಾದರೆ ನೇರವಾಗಿ ಲೋಕೋಪಯೋಗಿ ಇಲಾಖೆ ಹೊಣೆ ' ಇದೇ ಹದಗೆಟ್ಟ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಅಧಿಕಾರಿಗಳು ಜವಾಬ್ದಾರರಾಗುತ್ತಾರೆ . ಈಗಾಗಲೇ ಸವ