Download Now Banner

This browser does not support the video element.

ಮಂಡ್ಯ: ಉಮ್ಮಡಹಳ್ಳಿ ಹೈವೇ ಅಂಡರ್‌ಪಾಸ್‌ನಲ್ಲಿ ಸಿಕ್ಕಿಹಾಕಿಕೊಂಡ ಗಣೇಶ, ಸಾಗಿಸಲು ಯುವಕರ ಹರಸಾಹಸ

Mandya, Mandya | Aug 26, 2025
ಹಬ್ಬಕ್ಕೆ ಕ್ಷಣಗಣನೆ ಅರಂಭವಾಗಿರುವ ಹಿನ್ನೆಲೆಯಲ್ಲಿ ಬೃಹತ್ ಗಣೇಶ ಮೂರ್ತಿ ಸಾಗಿಸಲು ಮಂಡ್ಯ ತಾಲ್ಲೂಕಿನ ಹಾಡ್ಯ ಗ್ರಾಮದ ಯುವಕರು ಹರಸಾಹಸಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಉಮ್ಮಡಹಳ್ಳಿ ಹೈವೇ ಅಂಡರ್'ಪಾಸ್'ನಲ್ಲಿ ಜರುಗಿತು. ಹೈದರಾಬಾದ್ ಪಟ್ಟಣದಲ್ಲಿ ಸುಮಾರು 20 ಅಡಿಗೂ ಮಿಗಿಲಾದ ಸುಮಾರು ₹ 1.75 ಲಕ್ಷ ಮೌಲ್ಯದ ಗಣೇಶ ಮೂರ್ತಿಯನ್ನು ಕಳೆದ 3 ದಿನಗಳಿಂದ ಸಾಗಿಸಲಾಗುತ್ತಿತ್ತು. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬಂದ ಗಣೇಶ ಮೂರ್ತಿಯನ್ನು ಉಮ್ಮಡಹಳ್ಳಿ ಗೇಟ್ ಬಳಿ ಅಂಡರ್ ಪಾಸ್ ಮೂಲಕ ಮಂಡ್ಯ ಬೈಪಾಸ್ ರಸ್ತೆ ಸಾಗಿಸಲು ಮುಂದಾದಾಗ ತಡೆಯುಂಟಾಯಿತು. ಬಳಿಕ ಗಣೇಶ ಮೂರ್ತಿಯ ಹಿಂದಿನ ಕಿರೀಟ ಮಡಚಿ ನಿಧಾನವಾಗಿ ಸಾಗಿಸಲು ಭಕ್ತರು ಹರಸಾಹಸಪಟ್ಟರು.
Read More News
T & CPrivacy PolicyContact Us