ಗೌರಿಬಿದನೂರು ನಗರದ ಬೈಪಾಸ್ ರಸ್ತೆಯಿಂದ ಡಿ.ಪಾಳ್ಯ ಮಾರ್ಗದ ರಸ್ತೆಯ ಮರು ಡಾಂಬರೀಕರಣ ಮಾಡುವ ಅಭಿವೃದ್ದಿ ಕಾಮಗಾರಿಗೆ ಸುಮಾರು 5.ಕೋಟಿ ವೆಚ್ಚದಲ್ಲಿ ಗುದ್ದಲಿ ಪೂಜೆಯನ್ನು ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡರವರು ನೆರವೇರಿಸಿದರು. ಈ ವೇಳೆ ಮಾತನಾಡಿ, ಹಲವು ವರ್ಷಗಳಿಂದ ಈ ರಸ್ತೆಯಲ್ಲಿ ಸಂಚರಿಸಲು ತೊಂದರೆ ಅನುಭವಿಸುತ್ತಿದ್ದ ಸಾರ್ವಜನಿಕರ ಸಮಸ್ಯೆ ಬಗೆ ಹರಿಸಿದಂತಾಗಿದೆ ಎಂದರು.ಹಾಗೂ ತೊಂಡೇಭಾವಿ ಹೋಬಳಿಯ ಮಲ್ಲಸಂದ್ರಗ್ರಾಮದಲ್ಲಿ ಎಸ್.ಸಿ.ಕಾಲೂನಿಯಲ್ಲಿ ಸುಸುಜ್ಜಿತವಾದ ಸಿ.ಸಿ.ರಸ್ತೆ ಚರಂಡಿ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.