Download Now Banner

This browser does not support the video element.

ಶೋರಾಪುರ: ಅಗ್ನಿ ಗ್ರಾಮದಲ್ಲಿ ಕೆಂಭಾವಿ ಪೊಲೀಸರಿಂದ ಭಿಕ್ಷುಕನ ವೇಷದಲ್ಲಿ ಗಾಂಜಾ ಮಾರುತಿದ್ದ ಆರೋಪಿಯ ಬಂಧನ

Shorapur, Yadgir | Aug 26, 2025
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದಾವಲಸಾಬ್ ಎನ್ನುವ ವ್ಯಕ್ತಿ ಭಿಕ್ಷುಕನ ವೇಷದಲ್ಲಿ ರಾಜ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಕೆಂಭಾವಿ ಪೊಲೀಸರು ಸೋಮವಾರ ಸಾಯಂಕಾಲ ಆರೋಪಿಯನ್ನು ಬಂಧಿಸಿದ್ದಾರೆ. ನಂತರ ಆತನ ಮನೆಗೆ ಹೋಗಿ ಪರಿಶೀಲನೆ ಮಾಡಿದಾಗ ಜಮೀನಿನಲ್ಲಿ ಗಾಂಜಾ ಬೆಳೆದಿರುವುದು ಪತ್ತೆಯಾಗಿದ್ದು 850 ಗ್ರಾಂ ಗಾಂಜಾ ಗಿಡ ದೊರೆತಿದೆ ಎಂದು ತಿಳಿದುಬಂದಿದೆ. ಈ ಕುರಿತು ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More News
T & CPrivacy PolicyContact Us