ಅತಿವೃಷ್ಟಿ ಹಿನ್ನೆಲೆಯಲ್ಲಿ ರಸ್ತೆಗಳು ಜಲ ವೃತ್ತಗೊಂಡಿದ್ದು ಹಾಗೂ ಹೊಲಗಳಲ್ಲಿ ನೀರು ಸಂಗ್ರಹಗೊಂಡು ಬೆಳೆಹಾನಿ ಸಂಭವಿಸಿದ ಹಿನ್ನೆಲೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಾಲೂಕಿನ ಬೋತಗಿ ಹಾಗೂ ಸಿಂದಬಂದಗಿ ಗ್ರಾಮಗಳಿಗೆ ಗುರುವಾರ ಮಧ್ಯಾಹ್ನ 1 :15 ಕ್ಕೆ ಭೇಟಿ ನೀಡಿದರು. ಈ ವೇಳೆ ತಹಸಿಲ್ದಾರ್ ಅಂಜುಮ್ ತಬಸುಮ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.