Download Now Banner

This browser does not support the video element.

ಪಾವಗಡ: ಪಿಆರ್ಎಸ್ ವ್ಯವಸ್ಥೆ ಹಿಂಪಡೆಯಬೇಕು ಪಟ್ಟಣದಲ್ಲಿ ಕಪ್ಪುಬಟ್ಟಿ ಧರಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

Pavagada, Tumakuru | Aug 21, 2025
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಆರ್ಎಸ್ (ಮುಖ ಚಹರೆ ಗುರುತಿಸುವ) ವ್ಯವಸ್ಥೆ ವಿರುದ್ಧವಾಗಿ ಪಟ್ಟಣದ ಅಂಗನವಾಡಿ ಕಾರ್ಯಕರ್ತರು ಗುರುವಾರ ಸಂಜೆ 5 ಗಂಟೆಯಲ್ಲಿ ಕಪ್ಪು ಬಟ್ಟಿಯನ್ನು ಧರಿಸಿ ಸಿಡಿಪಿಓ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ನಂತರ ಅವರು ಸಿಡಿಪಿಓ ಸುನಿತಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಅಂಗನವಾಡಿ ಕಾರ್ಯಕರ್ತೆಯರ ತಾಲೂಕು ಅಧ್ಯಕ್ಷೆ ಸುಶೀಲಮ್ಮ ಮಾತನಾಡಿ, “ಗರ್ಭಿಣಿ ಮತ್ತು ಬಾಣಂತಿಯರು ಸರ್ಕಾರ ನೀಡುವ ಅಲ್ಪ ಪ್ರಮಾಣದ ಪೌಷ್ಠಿಕ ಆಹಾರ ಪಡೆಯಲು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ. ಪಿಆರ್ಎಸ್ ಸೆರೆಹಿಡಿಯುವ ಸಂದರ್ಭದಲ್ಲಿ ನಿರಂತರ ನೆಟ್ವರ್ಕ್ ಸಮಸ್ಯೆಯಿಂದ ತೊಂದರೆ ಹೆಚ್ಚಾಗಿದೆ. ಆದ್ದರಿಂದ ಈ ವ್ಯವಸ್ಥೆಯನ್ನು ಕೂಡಲೇ ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.
Read More News
T & CPrivacy PolicyContact Us