ಮುಧೋಳ ತಾಲೂಕಿಗೆ ಆಗಮಿಸಿದ ಕಾನೂನು, ಸಂಸದೀಯ ವ್ಯವಹಾರಗಳ ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಅವರು, ಅಬಕಾರಿ ಮತ್ತು ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ್ ಅವರನ್ನು ಒಳಮೀಸಲಾತಿ ಜಾರಿಗೊಳಿಸುವಲ್ಲಿ ಅವರ ಕೊಡುಗೆಗಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿದರು.35 ವರ್ಷಗಳ ಒಳಮೀಸಲಾತಿ ಹೋರಾಟದಲ್ಲಿ ಸಚಿವ ಆರ್.ಬಿ. ತಿಮ್ಮಾಪೂರ್ ಅವರ ಸೇವೆ ಅತ್ಯಂತ ಪ್ರಮುಖವಾದುದು. ಬಾಗಲಕೋಟೆ ಜಿಲ್ಲೆಯಿಂದ ಆರಂಭವಾದ ಈ ಹೋರಾಟವನ್ನು, ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಲಿತ ಸಮುದಾಯಕ್ಕೆ ನ್ಯಾಯಯುತ ಫಲವನ್ನು ಒದಗಿಸುವಲ್ಲಿ ತಿಮ್ಮಾಪೂರ್ ಅವರು ಪ್ರಮುಖ ಪಾತ್ರ ವಹಿಸಿದ್ದರೆಂದರು.