ಎತ್ತು ತೊಳೆಯಲು ಹೋದ ವ್ಯಕ್ತಿಗೆ ಮೊಸಳೆ ಎಳೆದು ಕೊಂಡು ಹೋದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಚಗನೂರ ಗ್ರಾಮದ ಬಳಿ ನಡೆದಿದೆ. ಕಾಸಪ್ಪ ಹಣಮಂತ ಕಂಬಳಿ (38) ಮೊಸಳೆ ಬಾಯಲ್ಲಿ ಸಿಲುಕಿದ ವ್ಯಕ್ತಿಯಾಗಿದ್ದು, ಸ್ಥಳದಲ್ಲಿ ಈಗ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ...