Download Now Banner

This browser does not support the video element.

ಚಾಮರಾಜನಗರ: ಗಣೇಶ ಹಬ್ಬ ಹಿನ್ನೆಲೆ ನಗರದಲ್ಲಿ ಎಸ್ಪಿ ನೇತೃತ್ವದಲ್ಲಿ‌‌ ಪೊಲೀಸರಿಂದ ರೂಟ್ ಮಾರ್ಚ್

Chamarajanagar, Chamarajnagar | Aug 27, 2025
ಗಣಪತಿ ಹಬ್ಬ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಚಾಮರಾಜನಗರದಲ್ಲಿ ಎಸ್​ಪಿ ಡಾ.ಬಿ.ಟಿ.ಕವಿತಾ ನೇತೃತ್ವದಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು. ಚಾಮರಾಜನಗರದ ಪೇಟೆ ಪ್ರೈಮರಿ ಶಾಲೆಯಿಂದ ಎಸ್ಪಿ‌ ಡಾ.ಬಿ.ಟಿ.ಕವಿತಾ ನೇತೃತ್ವದಲ್ಲಿ ಬುಧವಾರ ಸಂಜೆ ಆರಂಭಗೊಂಡ ಪಥ ಸಂಚಲನವು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ರಸ್ತೆ, ಗುಂಡ್ಲುಪೇಟೆ ಸರ್ಕಲ್, ಚಿಕ್ಕಂಗಡಿ- ದೊಡ್ಡಂಗಡಿ ಬೀದಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಚಾಮರಾಜನಗರ ಪಟ್ಟಣ, ಪೂರ್ವ, ಗ್ರಾಮಾಂತರ ಠಾಣೆ ಮೀಸಲು ಹಾಗೂ ಟ್ರಾಫಿಕ್ ಠಾಣೆ ಪೊಲೀಸರು ಪಥ ಸಂಚಲನ ನಡೆಸಿದರು‌.
Read More News
T & CPrivacy PolicyContact Us