Download Now Banner

This browser does not support the video element.

ಮೈಸೂರು: ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಇರಬೇಕು: ನಗರದಲ್ಲಿ ಶಾಸಕ ತನ್ವೀರ್ ಸೇಠ್

Mysuru, Mysuru | Sep 6, 2025
ಆಧುನೀಕ ಕಾಲಕಟ್ಟದಲ್ಲಿ ಶಿಕ್ಷಣ ಕ್ಷೇತ್ರವು ಕೇವಲ ಅಂಕಗಳಿಕೆಗೆ ಸೀಮಿತವಾಗದೇ, ಶಿಕ್ಷಣ ರಾಜಕೀಯ, ಆಡಳಿತಾಹಿ ವ್ಯವಸ್ಥೆ ದೂರವಿದ್ದು, ಮಾನವ ಕುಲಕ್ಕೆ ಮಾನವೀಯತೆ ಕಲಿಸಿ ಪ್ರಕೃತಿ ನಿಯಮದಂತೆ ಜೀವನ ಮಾರ್ಗ ನಡೆಸುವ ಸಾಧನವಾಗಬೇಕು. ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಇರಬೇಕು ಎಂದು ನರಸಿಂಹರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಹೇಳಿದರು. ಇಂದು ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಡಳಿತದಲ್ಲಿರುವ ಸರ್ಕಾರಗಳು ತಮ್ಮ ಸಿದ್ಧಾಂತವನ್ನು ಪಠ್ಯದಲ್ಲಿ ಹೇರುವ ಕೆಲಸ ನಿಷೇಧವಾಗಬೇಕು.
Read More News
T & CPrivacy PolicyContact Us