ಇನ್ನೋವಾ ಕಾರು-ಟಂಟಂ ಮುಖಾಮುಖಿ ಡಿಕ್ಕಿ ಇಬ್ಬರ ದುರ್ಮರಣ.ಅನಗವಾಡಿ ಬ್ರಿಡ್ಜ್ ಬಳಿ ತಡರಾತ್ರಿ ನಡೆದ ಭೀಕರ ಅಪಘಾತ. ಮಹೇಶ್ ನಾಯ್ಕರ್ (27) ಮೆಹಬೂಬ್ ಶೇಖ್ (30) ಮೃತ ದುರ್ದೈವಿಗಳು.ಮೂವರಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು.ವಿಶಾಲ್ ವರತಿಲ್ಲೆ, ವಿಜಯಕುಮಾರ್ ಭೋವಿ, ಗುರುಪ್ರಸಾದ್ ಸುಂಕದ ಗಾಯಾಳುಗಳು.ಟಂಟಂ ನಲ್ಲಿದ್ದ ಐವರು ಬಾಗಲಕೋಟೆ ಕಡೆಗೆ ಬರ್ತಿದ್ರು. ಊಟಕ್ಕೆಂದು ಸಮೀಪದ ವಿಜಯಪುರ ಜಿಲ್ಲೆಯ ಕೊಲ್ಹಾರಕ್ಕೆ ತೆರಳಿದ್ರು.ತಡರಾತ್ರಿ ವಾಪಸ್ ಬರುತ್ತಿದ್ದ ವೇಳೆ ನಡೆದ ದುರ್ಘಟನೆ.ಮೃತರು, ಗಾಯಾಳುಗಳು ನವನಗರದ 45 ಸೆಕ್ಟರ್ ನಿವಾಸಿಗಳು.ಸ್ಥಳಕ್ಕೆ ಕಲಾದಗಿ ಪೊಲೀಸರ ಭೇಟಿ ಪರಿಶೀಲನೆ.