Download Now Banner

This browser does not support the video element.

ಶಹಾಪುರ: ಚೆನ್ನಪ್ಪ ಆನೆಗುಂದಿ ವಿರುದ್ಧ ದಾಖಲಿಸಿದ ಸುಳ್ಳು ಜಾತಿನಿಂದನೆ ಕೇಸ್ ರದ್ದು ಮಾಡಿ: ನಗರದಲ್ಲಿ ಪ್ರಾಂತ ರೈತ ಸಂಘ ಒತ್ತಾಯ

Shahpur, Yadgir | Aug 22, 2025
ಶಹಪುರ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ನಾಗಪ್ಪ ಎಂಬ ವ್ಯಕ್ತಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಚೆನ್ನಪ್ಪ ಆನೆಗುಂದಿ ಅವರ ಮೇಲೆ ಸುಳ್ಳು ಜಾತಿನಿಂದನೆ ಪ್ರಕರಣ ದಾಖಲಿಸಿದ್ದು ಅದನ್ನು ರದ್ದುಗೊಳಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ ಸಾಗರ್ ಆಗ್ರಹಿಸಿದರು. ಶುಕ್ರವಾರ ಮಧ್ಯಾಹ್ನ ಶಹಾಪುರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಹೊಸಕೇರಾ ಗ್ರಾಮದ ನಮ್ಮ ಸಂಘದ ಮುಖಂಡ ಯಲ್ಲಪ್ಪ ಎನ್ನುವವರ ಮೇಲೂ ಹಲ್ಲೆ ನಡೆಸಲಾಗಿದ್ದು,ಅವರ ಮೇಲೂ ಪ್ರಕರಣವನ್ನು ದಾಖಲಿಸಿದ್ದಾರೆ.ಸರ್ಕಾರ ಈ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಸಂಘದ ಜಿಲ್ಲಾಧ್ಯಕ್ಷ ಚೆನ್ನಪ್ಪ ಆನೆಗುಂದಿ ಟಾಪ್ ಪ್ರ ಕಾರ್ಯದರ್ಶಿ ಭೀಮರಾಯ ಪೂಜಾರಿ ಇತರರು ಇದ್ದರು.
Read More News
T & CPrivacy PolicyContact Us