ಧರ್ಮಸ್ಥಳ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಶಡ್ಯಂತ್ರ ಮಾಡುತ್ತಿದೆ ಎಂದು ಸಿ ಟಿ ರವಿ ಹೇಳಿಕೆ ನೀಡಿದ್ದಾರೆ. ಗುರುವಾರ ಸಂಜೆ 7 ಗಂಟೆಗೆ ಚಿತ್ರದುರ್ಗದ ಹಿಂದೂ ಮಹಾ ಗಣಪತಿಯ ದರ್ಶನ ಪಡೆದ ಸಿ ಟಿ ರವಿ ಅವರು ಮಾತನಾಡಿದ್ದು ಧರ್ಮಸ್ಥಳ ವಿಚಾರದಲ್ಲಿ ಶಡ್ಯಂತ್ರ ಇರುವುದು ಅಂಗೈ ಮೇಲಿನ ಹುಣ್ಣಿನಷ್ಟು ಸ್ಪಷ್ಟವಾಗಿದೆ. ಸರ್ಕಾರಕ್ಕೂ ಕೂಡ ಈ ಬಗ್ಗೆ 2023 ರ ಜುಲೈ ಸೂಚನೆ ಬಂದಿತ್ತು. ಟಾರ್ಗೆಟ್ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಎಂದು ತಿಳಿದಿದ್ದು ಸರ್ಕಾರಕ್ಕೆ ಈ ಬಗ್ಗೆ ಗೊತ್ತಿದ್ದರು ಮೌನ ವಹಿಸಿತ್ತು. ನಾವು ಸೌಜನ್ಯ ಪರ ಅಥವಾ ವೀರೇಂದ್ರ ಹೆಗ್ಗಡೆ ಪರವ ಎಂದು ಪ್ರಶ್ನೆ ಕೇಳಿದ್ದ ಅಸಂಭದ್ದವಾಗಿದೆ.