ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಮಾಧ್ಯಮಗಳ ಜೊತೆ ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಾತನಾಡಿ, ರಾಜ್ಯ ಸರ್ಕಾರ ಪದೇ ಪದೇ ಹಿಂದುಗಳ ಭಾವನಕ್ಕೆ ಧಕ್ಕೆ ತರುತ್ತಿದೆ. ಕಾಂಗ್ರೆಸ್ ನ ರಾಜ್ಯಸಭೆ ಸದಸ್ಯರ ಬೆಂಬಲಿಗರಿಂದ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲಾಗಿದೆ. ಅದನ್ನೇ ಒಂದು ಕಡೆ ಸರ್ಕಾರ ಮುಚ್ಚಿ ಹಾಕಿಬಿಡ್ತು. ಚಾಮುಂಡೇಶ್ವರಿ ದೇವಸ್ಥಾನ ವನ್ನು ಹಿಂದುಗಳ ಸ್ವತ್ತಾ ಎಂದಿದ್ದಾರೆ..? ಹಾಗಿದ್ರೆ ಯಾವಾಗ ಇದನ್ನು ವಕ್ಫ್ ಬೋರ್ಡ್ ಗೆ ಬರೆಯುತ್ತೀರಾ ? ಅಲ್ಲಿ ಯಾವಾಗ ಮಸೀದಿ ನಿರ್ಮಾಣ ಮಾಡ್ತೀರಾ ? ಚಾಮುಂಡೇಶ್ವರಿ ದೇಗುಲವನ್ನು ಹಿಂದು ದೇವಾಲಯ ಅನ್ನೋರು ನಿಮ್ಮನ್ನು ಏನಂತ ಕರಿಯಬೇಕು ಎಂದು ಕಿಡಿಕಾರಿದರು.