ರಾಜ್ಯಾದ್ಯಂತ ಹಲವು ದಿನಗಳ ಹಿಂದೆ ಬಡ್ಡಿ ದಂಧೆಕೋರರ ಹಾವಳಿ ವಿಪರೀತ ಆಗಿತ್ತು. ಇದಕ್ಕೆ ಹಲವಾರು ಜನರು ಆತ್ಮಹತ್ಯೆಯನ್ನು ಕೂಡ ಮಾಡಿಕೊಂಡಿದ್ದರು. ಗದಗ ಬೆಟಗೇರಿ ಅವಳಿ ನಗರದಲ್ಲೂ ಬಡ್ಡಿ ದಂಧೆಕೋರರ ಕಿರುಕುಳದಿಂದಾಗಿ ಊರು ಬಿಟ್ಟ ಉದಾಹರಣೆ ಕೂಡ ಇವೆ. ಈ ಬಗ್ಗೆ ಪೊಲೀಸರು ಹಲವರು ವಿರುದ್ದ ಪ್ರಕರಣ ಕೂಡ ದಾಖಲಿಸಿದ್ದಾರೆ. ಆದರೆ, ಬಡ್ಡಿ ದಂಧೆ ಮತ್ತೆ ತಲೆಯೆತ್ತಿದ್ದು ಮನೆಗೆ ಬಂದು ವ್ಯಕ್ತಿಗೆ ಹಣ ನೀಡುವಂತೆ ಕಿರುಕುಳ ನೀಡಿದ್ದಾರೆ.