ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನ ಸಭಾ ಕ್ಷೇತ್ರದ ವಟಪರವಿ ಕೆರೆಗೆ ಕೃಷ್ಣಾ ನದಿಯಿಂದ ಕೆರೆ ತುಂಬಿಸುವ ಯೋಜನೆಯಲ್ಲಿ ಇಂದು ನೀರು ಬಿಡಲಾಯಿತು. ಆಗಸ್ಟ್ 31 ರಂದು ಸಂಜೆ 6-00 ಗಂಟೆಗೆ ನೆಲಜೇರಿ ವಟಪರವಿ ಕೆರೆಗೆ ನೀರು ಬಂದಿದ್ದು ಈ ಭಾಗದ ರೈತರ ಕೊಳವೆ ಬಾವಿಯಲ್ಲಿ ಅಂತರ ಜಲ ಮಟ್ಟ ಹೆಚ್ಚಾಗಲಿದೆ. ಸಂಪೂರ್ಣ ಮಸಾರಿ ಜಮೀನು ಹೊಂದಿರುವ ಈ ಭಾಗದ ರೈತರಲ್ಲಿ ಮಂದಹಾಸ ಮೂಡಿಸಿದೆ ಬರದ ನಾಡಿಗೆ ಕೃಷ್ಣ ನದಿಯಿಂದ ಕೆರೆ ತುಂಬಿಸುವ ಯೋಜನೆಯಲ್ಲಿ ನೀರು ಬಂದಿದೆ