ಗೌರಿ ಗಣೇಶ ಹಬ್ಬದ ಪ್ರಯುಕ್ತ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್ ನ ಯಡಿಯೂರು ಕೆರೆಯಲ್ಲಿ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಸಾಮೂಹಿಕ ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸೇರಿದಂತೆ ಬಿಜೆಪಿ ಮುಖಂಡರು ಪಾಲ್ಗೊಂಡರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಣ್ಣಿನ ಗಣೇಶವನ್ನ ಬಳಕೆ ಮಾಡುವಂತೆ ಸೂಚಿಸಿದರು. ಗೌರಿ ಗಣೇಶ ಹಬ್ಬ ಇಡೀ ದೇಶದ್ಯಂತ ಮಾಡುವಂತ ಹಬ್ಬ ಹಾಗಾಗಿ ಬಣ್ಣದ ಗಣೇಶಗಳನ್ನ ಬಳಸದೇ,ಮಣ್ಣಿನ ಗಣೇಶಗಳನ್ನ ಬಳಕೆ ಮಾಡುವಂತೆ ಮನವಿ ಮಾಡಿದರು.