ಕೊಳ್ಳೇಗಾಲ: ಭಾರತೀಯ ಜೀವ ವಿಮಾ ನಿಗಮ ತನ್ನ 69ನೇ ವಾರ್ಷಿಕೋತ್ಸವದ ಅಂಗವಾಗಿ ವಿಮೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೊಳ್ಳೇಗಾಲಬಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿತು. ಕೊಳ್ಳೇಗಾಲದ ಎಲ್ಐಸಿ ಕಚೇರಿಯಿಂದ ಪ್ರಾರಂಭಗೊಂಡ ಮೆರವಣಿಗೆಯಲ್ಲಿ, ಘೋಷಣೆ ಕೂಗುವ ಮೂಲಕ ಜನರ ಗಮನ ಸೆಳೆಯಲಾಯಿತು. ಈ ಮೂಲಕ ವಿಮೆಯ ಮಹತ್ವ, ಅದರ ಅಗತ್ಯತೆ ಮತ್ತು ಸಾರ್ವಜನಿಕರ ಒಳಿತಿಗಾಗಿ ಎಲ್ಐಸಿ ನೀಡುತ್ತಿರುವ ಸೇವೆಗಳ ಬಗ್ಗೆ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಶಾಖಾ ಅಧಿಕಾರಿ ಜಿ.ಎನ್. ಮಹದೇವಸ್ವಾಮಿ ಮಾತನಾಡಿ,ವಿಮೆ ಕೇವಲ ಹಣಕಾಸು ಸುರಕ್ಷತೆಗಷ್ಟೇ ಅಲ್ಲ, ಕುಟುಂಬದ ಭವಿಷ್ಯಕ್ಕೂ ಆತ್ಮವಿಶ್ವಾಸದ ಆಧಾರವಾಗಿದೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ವಿಮೆ ಪಡೆಯಿರಿ ಎಂದರು