Download Now Banner

This browser does not support the video element.

ಮದ್ದೂರು: ಬೋರಾಪುರದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಸಾಮಾಗ್ರಿ ತರಲು ತೆರಳುತ್ತಿದ್ದಾಗ ಎತ್ತಿನಗಾಡಿಗೆ ಬೈಕ್ ಡಿಕ್ಕಿ, ಯುವಕ ಸಾವು

Maddur, Mandya | Aug 27, 2025
ಗಣೇಶ ಪ್ರತಿಷ್ಠಾಪನೆಗೆ ಸಾಮಾಗ್ರಿ ತರಲು ತೆರಳುತ್ತಿದ್ದ ಬೈಕ್ ಎತ್ತಿನಗಾಡಿ ಡಿಕ್ಕಿಯಾಗಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೊಬ್ಬ ತೀರ್ವ ಗಾಯಗೊಂಡಿರುವ ಘಟನೆ ಬೋರಾಪುರದಲ್ಲಿ ಜರುಗಿದೆ. ಸುಹಾಸ್ (19) ಮೃತಪಟ್ಠವರು. ಗ್ರಾಮದಿಂದ ಮದ್ದೂರಿಗೆ ಪೂಜಾ ಸಾಮಾಗ್ರಿ ತರಲು ತೆರಳುವ ವೇಳೆ ಗ್ರಾಮ ಪರಿಮಿತಿಯಲ್ಲಿ ನಿಂತಿದ್ದ ಎತ್ತಿನಗಾಡಿಗೆ ಹಿಂದಿನಿಂದ ಬೈಕ್ ಡಿಕ್ಕಿಯಾಗಿ ಸುಹಾಸ್ ಗೆ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಚಾಲನೆ ಮಾಡುತ್ತಿದ್ದ ತೇಜಸ್ (20) ಅವರ ತಲೆ, ಬೆನ್ನಿಗೆ ತೀವ್ರ ಗಾಯಗಳಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಕುರಿತಂತೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Read More News
T & CPrivacy PolicyContact Us