Download Now Banner

This browser does not support the video element.

ಹಾವೇರಿ: ಖೊಟ್ಟಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಜಾಗ ನೋಂದಣಿ ಮಾಡಿದ ಆರೋಪ; ಸುವರ್ಣಕಾರರ ಕೈಗಾರಿಕಾ ಸಹಕಾರ ಸಂಘ ಮುಖಂಡ ವೆಂಕಟೇಶ್ ಗರಂ

Haveri, Haveri | Aug 21, 2025
ಸ್ಥಳೀಯ ಇಜಾರಿಲಕಮಾಪುರದಲ್ಲಿ ಹಳೇ ಪಿ.ಬಿ. ರಸ್ತೆಗೆ ಹೊಂದಿಕೊಂಡಿರುವ 18 ಎಕರೆ ಜಮೀನಿನಲ್ಲಿದ್ದ ನಿವೇಶನಗಳನ್ನು ಹಾವೇರಿ ತಾಲೂಕು ಸುವರ್ಣಕಾರರ ಕೈಗಾರಿಕಾ ಕೆಲಸಗಾರರ ಸಹಕಾರ ಸಂಘದವರು ಹೊಟ್ಟಿದಾಖಲೆ ಸೃಷ್ಟಿಸಿ ಬೇರೆಯವರಿಗೆ ನೋಂದಣಿ ಮಾಡಿಕೊಟ್ಟಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ ಎಂದು ಮುಖಂಡ ವೆಂಕಟೇಶ ದೈವಜ್ಞ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಜಾರಿ ಲಕಮಾಪುರ ಗ್ರಾಮ ಪಂಚಾಯಿತಿಯಿಂದ 128 ಜನರಿಗೆ ಮಂಜೂರಾಗಿದ್ದ ನಿವೇಶನಗಳಿದ್ದ ಜಮೀನನ್ನೇ ಸಂಘದವರು ತಮ್ಮದೆಂದು ಹೇಳಿ ಮಾರಾಟ ಮಾಡಿದ್ದಾರೆ ಎಂದು ದೂರಿದರು. ನಿವೇಶನ ಹಂಚಿಕೆ ವಿಚಾರವಾಗಿ ಇತ್ತೀಚೆಗೆ ಹೈಕೋರ್ಟ್ ಸಹ ಆದೇಶ ಹೊರಡಿಸಿದೆ.
Read More News
T & CPrivacy PolicyContact Us