Download Now Banner

This browser does not support the video element.

ಹನೂರು: ಎಲ್ಲೆಮಾಳದ ಬಳಿಯ ಕಾವೇರಿ ವನ್ಯಧಾಮದಲ್ಲಿ ಜಿಂಕೆಯ ಮಾಂಸ ತೆಗೆದು ಚರ್ಮ ಬಿಸಾಡಿದ ಆರೋಪಿ; ಪರಾರಿ

Hanur, Chamarajnagar | Sep 5, 2025
ಚಾಮರಾಜನಗರ ಜಿಲ್ಲೆ, ಹನೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಜಿಂಕೆಯೊಂದನ್ನು ಅಕ್ರಮವಾಗಿ ಬೇಟೆಯಾಡಿ, ಅದರ ಮಾಂಸ ತೆಗೆದು, ಚರ್ಮವನ್ನು ಬಿಸಾಡಿದ ಪ್ರಕರಣದಲ್ಲಿ ಆರೋಪಿ ಪರಾರಿಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಜ್ಜೀಪುರ ಗ್ರಾಮದ. ನಾಗರಾಜು ಎಂಬಾತನು ಶಾಗ್ಯ ಶಾಖೆಯ ಎಲ್ಲೆಮಾಳ ಗಸ್ತಿನ ವ್ಯಾಪ್ತಿಯಲ್ಲಿ ಈ ಕೃತ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾನೆ. ಘಟನೆಯ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಜಿಂಕೆಯ ಚರ್ಮವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಯ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆತನ ಬಂಧನಕ್ಕಾಗಿ ಜಾಲ ಬೀಸಲಾಗಿದೆ.
Read More News
T & CPrivacy PolicyContact Us