Download Now Banner

This browser does not support the video element.

ಮಳವಳ್ಳಿ: ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರ ಹೇಳಿಕೆ, ಗುರುವಾರ ಬಿಜೆಪಿ ಜೆಡಿಎಸ್ ಕರೆ ನೀಡಿರುವ ಮಳವಳ್ಳಿ ಬಂದ್ ಗೆ ತೀವ್ರ ವಿರೋಧ

Malavalli, Mandya | Sep 10, 2025
ಮಳವಳ್ಳಿ : ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲು ತೂರಿದ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸುವುದರ ಜೊತೆಗೆ ಶಾಂತಿಗಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದರೂ ಕೂಡ ಸೆ.11 ರಂದು ಮಳವಳ್ಳಿ ಬಂದ್ ಗೆ ಕರೆ ನೀಡಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಪಿ ರಾಜು ಆರೋಪಿಸಿದ್ದಾರೆ. ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದ ಆವರಣದಲ್ಲಿ ಬುಧವಾರ ಸಾಯಂಕಾಲ 6.30 ರ ಸಮಯ ದಲ್ಲಿ ಸುದ್ದಿಗೋಷ್ಠಿ‌ ನಡೆಸಿ ಮಾತ ನಾಡಿದ ಅವರು ಮದ್ದೂರಿನಲ್ಲಿ ನಡೆದಿರುವ ಘಟನೆಯನ್ನು ಖಂಡಿಸುತ್ತೇವೆ. ತಪ್ಪಿತಸ್ಥರನ್ನು ವಶಕ್ಕೆ ಪಡೆದು ಶಿಕ್ಷೆಗೆ ಗುರಿಪಡಿ ಸುವ ಕಾನೂನು ಕ್ರಮ ನಡೆಯು ತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲದ ಬಂದ್ ಮಳವಳ್ಳಿಯಲ್ಲಿ ಏಕೆ ಎಂದು ಪ್ರಶ್ನಿಸಿದರು.
Read More News
T & CPrivacy PolicyContact Us