Download Now Banner

This browser does not support the video element.

ಮಂಡ್ಯ: ಮೈಷುಗರ್ ಆಸ್ತಿ ಅಕ್ರಮ ಅನುಭವದಾರರು ಸ್ವತ್ತು ಬಿಡದಿದ್ದರೆ ಕಾನೂನು ಕ್ರಮ: ನಗರದಲ್ಲಿ ಅಧ್ಯಕ್ಷ ಸಿ. ಡಿ. ಗಂಗಾಧರ್

Mandya, Mandya | Aug 30, 2025
ಮೈಷುಗರ್ ಕಂಪನಿ ಆಸ್ತಿಯ 27.39 ಎಕರೆ ಭೂಮಿಯಲ್ಲಿ ಅಕ್ರಮವಾಗಿ ಅನುಭವದಲ್ಲಿ ಇರುವವರು ಕೂಡಲೇ ಮೈಷುಗರ್ ಕಂಪನಿ ಸ್ವಾಧೀನಕ್ಕೆ ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಷುಗರ್ ಕಂಪನಿಯ ಸುಮಾರು 7.10 ಎಕರೆ ವಾಣಿಜ್ಯ ಭೂಮಿ ಹಾಗೂ ಸುಮಾರು 20.29 ಎಕರೆ ವ್ಯವಸಾಯ ಭೂಮಿಯು ಅನಧಿಕೃತ ಅನುಭವದಲ್ಲಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದರು. ಮೈಷುಗರ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಅನುಭವದಲ್ಲಿರುವ ಭೂಮಿ ಪತ್ತೆಗೆ ತಹಶೀಲ್ದಾರ್ ಜೊತೆಗೂಡಿ ಕಂಪನಿಯ ಆಡಳಿತ ಮಂಡಳಿಯು ಇದೇ ಮೇ.12 ಮತ್ತು ಜೂನ್ 30ರಂದು ಗ್ರಾಮ ಲೆಕ್ಕಾಧಿಕಾರಿ ಮತ್ತು ರಾಜಸ್ವ ನಿರೀಕ್ಷಕರೊಂದಿಗೆ ಮಾಹಿತಿ ಕಲೆ ಹಾಕಲಾಗಿದೆ ಎಂದರು.
Read More News
T & CPrivacy PolicyContact Us