ಕಲಬುರಗಿ : ಚಂದ್ರಂಪಳ್ಳಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಟ್ಟ ಪರಿಣಾಮ ಕೊಟ್ಟಿಗೆಗೆ ನೀರು ನುಗ್ಗಿ 40 ಹಸುಗಳು ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಜಲಾಶಯದ ಬಳಿ ನಡೆದಿದ್ದು, ಸೆ28 ಮಧ್ಯಾನ 2 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ತೆಲಂಗಾಣದ ಮಾಜಿ ಸಂಸದ ಶ್ರೀನಿವಾಸರೆಡ್ಡಿಗೆ ಸೇರಿದ ಫಾರ್ಮ್ಹೌಸ್ನಲ್ಲಿ ಹೈನುಗಾರಿಕೆವಾಗಿ 110 ಹಸುಗಳನ್ನ ಸಾಕಲಾಗಿತ್ತು. ಈ ವೇಳೆ ಚಂದ್ರಂಪಳ್ಳಿ ಜಲಾಶಯದಿಂದ ನೀರು ಕೊಟ್ಟಿಗೆಗೆ ನುಗ್ಗಿ 30 ಹಸುಗಳು ಸ್ಥಳದಲ್ಲೆ ಮೃತಪಟ್ಟರೆ, 10 ಹಸುಗಳು ಕೊಚ್ಚಿಕೊಂಡು ಹೋಗಿವೆ..