Download Now Banner

This browser does not support the video element.

ಸುಳ್ಯ: ಆಸ್ತಿ ಘೋಷಣೆ ಮಾಡದ ಹಿನ್ನೆಲೆ: ಬೆಳ್ಳಾರೆಯಲ್ಲಿ ಗ್ರಾಪಂ ಸದಸ್ಯ ಇಕ್ಬಾಲ್ ರ ಸದಸ್ಯತ್ವ ರದ್ದು

Sulya, Dakshina Kannada | Aug 27, 2025
ಬೆಳ್ಳಾರೆ ಗ್ರಾಮ ಪಂಚಾಯತ್‌ನ 1ನೇ ವಾರ್ಡ್ ಚುನಾಯಿತ ಸದಸ್ಯ ಕೆ.ಮುಹಮ್ಮದ್ ಇಕ್ಬಾಲ್‌ರ ಸದಸ್ಯತ್ವ ಚುನಾವಣೆ ಆಯೋಗ ರದ್ದುಗೊಳಿಸಿದೆ. ಮಹಮ್ಮದ್ ಇಕ್ಬಾಲ್ 2024-25ನೇ ಸಾಲಿನ ಆಸ್ತಿ ಮತ್ತು ಹೊಣೆಗಾರಿಕೆಯ ಘೋಷಣೆಯನ್ನು ನಿಗದಿತ ಅವಧಿಯೊಳಗೆ ದಾಖಲು ಮಾಡದೇ ಇರುವ ಕಾರಣ, ರಾಜ್ಯ ಚುನಾವಣಾ ಆಯೋಗವು ಉಲ್ಲೇಖದ ಆದೇಶದಂತೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಬಿ)(4)ರಡಿ ಅವರನ್ನು ಗ್ರಾಪಂ ಸದಸ್ಯತ್ವದಿಂದ ತೆಗೆದುಹಾಕಿ ಹಾಗೂ ಅವರ ಸದಸ್ಯ ಸ್ಥಾನವು ಖಾಲಿಯಾಗಿದೆ ಎಂದು ಘೋಷಿಸಿದೆ. ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ 2022 ಜುಲೈ 26ರಂದು ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಮುಹಮ್ಮದ್ ಇನ್ಸಾಲ್ ಹೆಸರು ಇತ್ತು.
Read More News
T & CPrivacy PolicyContact Us