ದಸರಾ ಹಬ್ಬದ ಉದ್ಘಾಟನೆ ಮಾಡಲು ಭಾನು ಮುಷ್ತಾಕ್ ಅವರ ಆಯ್ಕೆ ಕುರಿತು ಮಾತನಾಡಿ ನಾಡಹಬ್ಬ ದಸರಾ ಉದ್ಘಾಟನೆಯನ್ನು ಅವರಿಗೆ ವಹಿಸುತ್ತಿರುವದರ ಹಿಂದೆ ಸಿ ಎಮ್ ಸಿದ್ರಾಮಯ್ಯ ಅವರಿಂದ ಹಿಂದೂ ದೇವರುಗಳನ್ನ ಮತ್ತು ಪಾವಿತ್ರಯತೆಯನ್ನ ಅಪಮಾನ ಮಾಡುವ ಹುನ್ನಾರ ಅಡಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸವನ್ನ ಮಾಡುವದು ಸರಿ ಅಲ್ಲ, ಮಹಿಳಾ ಸಾಹಿತಿ ಭಾನು ಮುಷ್ತಾಕ್ ಅವರು ಮೊದಲು ಹಿಂದೂ ಧರ್ಮವನ್ನ ಒಪ್ಪುತ್ತೇನೆ,ಮುರ್ತಿ ಪುಜೆಯನ್ನು ಒಪ್ಪುತ್ತೇನೆ ಅಂತ ಹೇಳಲಿ.ಹಿಂದುಯೇತರ ಯಾರೆ ಆಗಲಿ ಬೇಕಿದ್ದರೆ ದಸರಾ ಉದ್ಘಾಟನೆ ಮಾಡಲಿ ಆದರೆ ಇಸ್ಲಾಂ ಧರ್ಮದ ಅನುಯಾಯಿಗಳು ಅಲ್ಲ ಅವರು ಬೇಕಿದ್ದರೆ ಕವಿ ಗೋಷ್ಟಿ ಮತ್ತು ಸಾಹಿತ್ಯ ಸಮ್ಮೇಳನ ಉದ್ಘಾಟಿಸಲಿ ಎಂದು ಶಾಸಕ ಯತ್ನಾಳ ವಿಜಯಪುರದಲ್ಲಿ ಮಂಗಳವಾರ ರಾತ್ರಿ 8ಗಂಟೆ ಸುಮಾರಿಗೆ ಹೇಳಿದರು.