Download Now Banner

This browser does not support the video element.

ಮಳವಳ್ಳಿ: ಮಂಡ್ಯದಲ್ಲಿ ಸಂಘಟನೆಗಳ ಪ್ರತಿಭಟನೆ, ಧರ್ಮಸ್ಥಳ ಅಸಹಜ ಸಾವು ಪ್ರಕರಣಗಳ ತನಿಖೆಗೆ ವಿಶೇಷ ತನಿಖೆ ತಂಡ ರಚನೆಗೆ ಆಗ್ರಹ

Malavalli, Mandya | Aug 28, 2025
ಮಂಡ್ಯ : ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವು, ದೌರ್ಜನ್ಯ ಭೂಕಗಳಿಕೆ ಪ್ರಕರಣಗಳ ತನಿಖೆಗೆ ವಿಶೇಷ SIT ತನಿಖಾ ತಂಡ ರಚಿಸುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಮುಖಂಡರು ಮಂಡ್ಯ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಗುರುವಾರ ಸಾಯಂಕಾಲ 4 ಗಂಟೆ ಸಮಯದಲ್ಲಿ ಕಚೇರಿ ಮುಂದೆ ನೆರೆದ ಸಂಘಟನೆಯ ಮುಖಂಡ ರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 20 ವರ್ಷಗಳ ಧರ್ಮಸ್ಥಳದಲ್ಲಿ ನಡೆದಿರುವ ಸಾವುಗಳು ಪ್ರಕರಣ ತನಿಖೆ ಆಗಬೇಕು. ದಲಿತರ ಭೂ ಕಬಳಿಕೆ, ಸೌಜನ್ಯ ಸಾವು ಪದ್ಮ ಲತಾ, ಮಾವುತ ನಾರಾಯಣ ಸಾವು, ವೇದವಲ್ಲಿ ಪ್ರಕರಣಕ್ಕೆ ನ್ಯಾಯ ಸಿಗಬೇಕು ಎಂದು ಮುಖಂಡರು ಆಗ್ರಹಿಸಿದರು.
Read More News
T & CPrivacy PolicyContact Us