Download Now Banner

This browser does not support the video element.

ಗುಡಿಬಂಡೆ: ರೈತರು ಸಂಘದಿಂದ ಸಾಲ ಪಡೆದು ಮತ್ತೆ ಮರುಪಾವತಿ ಮಾಡಿ ಚಿಕ್ಕಕುರುಬರಹಳ್ಳಿ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ನಾಗರಾಜರೆಡ್ಡಿ

Gudibanda, Chikkaballapur | Sep 10, 2025
ಗುಡಿಬಂಡೆ : ರೈತರು ಸಂಘದಿಂದ ಸಾಲ ಪಡೆದು ಮತ್ತೆ ಮರುಪಾವತಿ ಮಾಡುವುದರ ಮೂಲಕ ಸಂಘದ ಅಭಿವೃದ್ಧಗೆ ಶ್ರಮಿಸಬೇಕೆಂದು ಚಿಕ್ಕಕುರುಬರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಅಧ್ಯಕ್ಷ ಪಿ.ಎ.ನಾಗರಾಜರೆಡ್ಡಿ ತಿಳಿಸಿದರು. ಬುಧವಾರ ತಾಲೂಕಿನ ಬೀಚಗಾನಹಳ್ಳಿ ಗ್ರಾಮದ ಸಂಘದ ಆವರಣದಲ್ಲಿ ಚಿಕ್ಕಕುರುಬರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಈಗಾಗಲೇ ಸಂಘದಿಂದ ರೈತರಿಗೆ ಕುರಿಸಾಕಾಣಿಕೆ, ಕೋಳಿ ಸಾಕಾಣಿಕೆ ಸೇರಿ ಇತರೆ ಕೆಲಸಗಳಿಗಾಗಿ ಸಾಲ ನೀಡುತ್ತಿದ್ದು, ಸಾಲವನ್ನು ಪಡೆದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದರು.
Read More News
T & CPrivacy PolicyContact Us