ಕೊಳ್ಳೇಗಾಲ ಪಟ್ಟಣದ ಪ್ರಸನ್ನ ವೀರಾಂಜನೇಯಸ್ವಾಮಿ ದೇವಾಲಯದ ಮುಂಭಾಗ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲಾಗಿದ್ದ ದೊಡ್ಡ ಗಣಪಿಯ ವಿಸರ್ಜನೆ ಮೆರವಣಿಗೆ ಗುರುವಾರ ಅದ್ದೂರಿಯಾಗಿ ಜರುಗಿತು. ಈ ಸಂದರ್ಭ ಶ್ರೀರಾಮ, ಆಂಜನೇಯ ಗಣಪತಿಯ ವೇಷಧಾರಿಗಳು ಹಾಗೂ ವಿವಿಧ ಶ್ವಾನದ ತಳಿಗಳುಮೆರವಣಿಗೆಯಲ್ಲಿ ಪಾಲ್ಗೊಂಡು ಗಮನಸೆಳೆದವು ಮೆರವಣಿಗೆಯು ವೀರಗಾಸೆ, ನಂದಿಕಂಬ, ಡೊಳ್ಳು, ತಮಟೆ ಸೇರಿದ ಸಾಂಸ್ಕೃತಿಕ ತಂಡಗಳ ಸಮ್ಮುಖದಲ್ಲಿ ಆರಂಭಗೊಂಡು, ಕೊಳ್ಳೇಗಾಲದ ಪ್ರಮುಖ ರಸ್ತೆಗಳಲ್ಲಿ ವಿಜೃಂಭಣೆಯಿಂದ ಸಾಗಿತು. ಈ ವೇಳೆ ವಿಶೇಷವಾಗಿವಿವಿಧ ತಳಿಯ ಶ್ವಾನಗಳು ಮೆರವಣಿಗೆಯಲ್ಲಿ ಭಾಗವಹಿಸಿ ಸಾರ್ವಜನಿಕರ ಗಮನಸೆಳೆದವು