ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಡಿಜೆ ಹಚ್ಚದಂತೆ ಜಾಗೃತಿ ಮೂಡಿಸಿ ಮುಸಲ್ಮಾನ ಯುವಕರು ಶಾಂತಿಯ ಸಂದೇಶ ರವಾನಿಸಿದರು. ನಗರದಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯ ಎದುರು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮಹ್ಮದ್ ಪೈಗಂಬರ್ ಅವರು ಹೇಳಿರುವ ಶಾಂತಿಯ ಸಂದೇಶ ಸಾರುವ ಭಿತ್ತಿಪತ್ರ ಪ್ರದರ್ಶನ ಮಾಡಿ ಜಾಗೃತಿ ಮೂಡಿಸುವ ಮೂಲಕ ಡಿಜೆ ಹಚ್ಚದಂತೆ ಜನರಲ್ಲಿ ಜಾಗೃತಿ ಮೂಡಿಸಿದರು.