ಕಲಬುರಗಿ : ಕಲಬುರಗಿ ನಗರದ ರಿಂಗ್ ರಸ್ತೆಯ ಟಿಪ್ಪು ಕಾಲೇಜು ಬಳಿ ಸೆ6 ರಂದು ರಿಯಲ್ ಎಸ್ಟೇಟ್ ಉದ್ಯಮಿ ಸುರೇಶರೆಡ್ಡಿ ಅಲಿಯಾಸ್ ಮಹ್ಮದ್ ಬಿಲಾಲ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಬ್ ಅರ್ಬಣನ್ ಠಾಣೆ ಪೊಲೀಸರು ಪ್ರಮುಖ ಆರೋಪಿ ಸಮೀರ್ ಅಲಿಯಾಸ್ ಟಮಾಟ ಸಮೀರ್ನನ್ನ ಬಂಧಿಸಿದ್ದಾರೆ.. ಸೆ8 ರಂದು ಸಂಜೆ 4 ಗಂಟೆಗೆ ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ... ಇನ್ನೂ ಮಹ್ಮದ್ ಬಿಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್, ಎಸಿ ಸೋಹೆಲ್, ಟಿಪ್ಪು,ಬಿಸ್ಲೇರಿ ಹುಸೇನ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು.