Download Now Banner

This browser does not support the video element.

ಕಡೂರು: ಸ್ನೇಹಿತನ ಕಾಪಾಡಲು ಹೋಗಿ ಕೊಚ್ಚಿ ಹೋದ ಯುವಕ..! ಸ್ಮಶಾನದ ಹೊಳೆಯಲ್ಲಿ ಶೋಧ..!

Kadur, Chikkamagaluru | Aug 21, 2025
ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಸ್ನೇಹಿತ ಹಾಗೂ ಸ್ನೇಹಿತನ ಬೈಕ್‌ನ್ನು ಕಾಪಾಡಲು ಹೋಗಿ ಯುವಕನೊಬ್ಬ ಕೊಚ್ಚಿ ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪ ಹರಿಯುವ ಸ್ಮಶಾನದ ಹೊಳೆಯಲ್ಲಿ ನಡೆದಿದೆ. ನೀರಿನಲ್ಲಿ ಕೊಚ್ಚಿ ಹೋದ ಯುವಕನನ್ನ ಚಿಕ್ಕಮಗಳೂರು ತಾಲೂಕಿನ ಸಾದರಹಳ್ಳಿ ಗ್ರಾಮದ 25 ಯತೀಶ್ ಎಂದು ಗುರುತಿಸಲಾಗಿದೆ. ನೀರಿನಲ್ಲಿ ಕೊಚ್ಚಿಹೋದ ಯುವಕನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ, ಸಖರಾಯಪಟ್ಟಣ ಪೊಲೀಸರು ಹಾಗೂ ಸ್ಥಳೀಯರಿಂದ ಶೋಧ ಕಾರ್ಯ ನಡೆಯುತ್ತಿದೆ.
Read More News
T & CPrivacy PolicyContact Us