Download Now Banner

This browser does not support the video element.

ಹನೂರು: ಗುಳ್ಯದಬಯಲು ಗ್ರಾಮದಲ್ಲಿ ದುರ್ಘಟನೆ: ಕೃಷಿ ಹೊಂಡದಲ್ಲಿ ಇಬ್ಬರ ಶವ ಪತ್ತೆ –ಅಕ್ರಮ ಸಂಬಂಧ ಶಂಕೆ

Hanur, Chamarajnagar | Aug 31, 2025
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಹುತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಳ್ಯದಬಯಲು ಗ್ರಾಮದಲ್ಲಿ, ಭಾನುವಾರ ಬೆಳಗ್ಗೆ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ಜಮೀನೊಂದರ ಕೃಷಿ ಹೊಂಡದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮೃತರು ಮೀನಾಕ್ಷಿ (31) ಮತ್ತು ರವಿ (30) ಎಂಬುವವರಾಗಿದ್ದಾರೆ. ಇವರ ಮೃತದೇಹಗಳನ್ನು ಸ್ಥಳೀಯರು ಕೃಷಿ ಹೊಂಡದಲ್ಲಿ ಕಂಡು ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಅಧಿಕಾರಿಗಳು ಸ್ಥಳಕ್ಕಾಗಮಿಸಿ ಗ್ರಾಮಸ್ಥರ ಸಹಾಯದಿಂದ ಶವಗಳನ್ನು ಹೊರತೆಗೆದು ತನಿಖೆ ಆರಂಭಿಸಿದ್ದಾರೆ.ಪ್ರಾಥಮಿಕ ಮಾಹಿತಿ ಪ್ರಕಾರ, ಇಬ್ಬರ ನಡುವಿನ ಅಕ್ರಮ ಸಂಬಂಧ ಈ ಸಾವಿಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇದರಿಂದ ಗ್ರಾಮದಲ್ಲಿತೀವ್ರ ಚರ್ಚೆ ಗ್ರಾಮವಾಗಿದೆ
Read More News
T & CPrivacy PolicyContact Us