Download Now Banner

This browser does not support the video element.

ಹನೂರು: ವಡೆಕಹಳ್ಳದ ಕರಿಕಲ್ಲುಗುಡ್ಡೆಬಯಲು ಅರಣ್ಯದಲ್ಲಿ ಉಡ ಬೇಟೆ: ಒರ್ವನ ಬಂಧನ, ಮತ್ತೊಬ್ಬ ಪರಾರಿ

Hanur, Chamarajnagar | Aug 31, 2025
ಹನೂರು ತಾಲೂಕಿನ ವಡಕೆಹಳ್ಳ ಸಮೀಪದ ಕರಿಕಲ್ಲು ಗುಡ್ಡೆಬಯಲು ಅರಣ್ಯ ಪ್ರದೇಶದಲ್ಲಿ ಉಡ ಬೇಟೆ ನಡೆಸಿದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಡಕೆಹಳ್ಳದ ನಿವಾಸಿಗಳಾದ ಚಿನ್ನ ಮುತ್ತು ಎಂಬಾತನೆ ಬಂಧಿತನಾಗಿದ್ದಾನೆ ಈ ಕಾರ್ಯಾಚರಣೆ ರಾಮಾಪುರ ವನ್ಯಜೀವಿ ವಲಯ ಮತ್ತು ಕೌದಳ್ಳಿ ವಲಯ ಅರಣ್ಯಾಧಿಕಾರಿ ಉಮಾಪತಿ ಕೆ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಖಚಿತ ಮಾಹಿತಿಯ ಆಧಾರಿಸಿ ಧಾಳಿ ನೆಡೆಸಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ ಚಿನ್ನ ಮುತ್ತ ರವರನ್ನು ಬಂಧಿಸಿದ್ದಾರೆ ಈ ವೇಳೆ ಕೊಳಂದ್ರೆ ಪರಾರಿಯಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದೆ.
Read More News
T & CPrivacy PolicyContact Us