ಪಟ್ಟಣದ ಕುರುಗೋಡು ಬಸ್ ನಿಲ್ದಾಣದ ಬಳಿಯ ಇಂದಿರಾ ಕ್ಯಾಂಟೀನ್ಗೆ ಶಾಸಕ ಜೆ.ಎನ್. ಗಣೇಶ್ ಸೆಪ್ಟೆಂಬರ್ 2,ಮಂಗಳವಾರ ಮಧ್ಯಾಹ್ನ 12:30ಕ್ಕೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಅವರು ಆಹಾರದ ಗುಣಮಟ್ಟ, ಅಡುಗೆಗೆ ಬಳಸುವ ಪದಾರ್ಥಗಳು ಮತ್ತು ಕ್ಯಾಂಟೀನ್ ನಿರ್ವಹಣೆಯ ಬಗ್ಗೆ ಸಿಬ್ಬಂದಿಗಳೊಂದಿಗೆ ವಿಚಾರಿಸಿದರು. ನಂತರ ಅಲ್ಲಿಯೇ ಸಾಮಾನ್ಯ ಜನರೊಂದಿಗೆ ಊಟ ಮಾಡಿ, ಸೇವೆ ಪರಿಶೀಲನೆ ನಡೆಸಿದರು