Download Now Banner

This browser does not support the video element.

ಚಾಮರಾಜನಗರ: ಡಿಕೆಶಿ ರಾಜೀನಾಮೆಗೆ ಆಗ್ರಹಿಸಿ ನಗರದಲ್ಲಿ ರೈತರಿಂದ ರಸ್ತೆ ತಡೆ ಚಳವಳಿ

Chamarajanagar, Chamarajnagar | Sep 9, 2025
ರೈತರ ಜೊತೆ ಅನುಚಿತವಾಗಿ ವರ್ತಿಸಿದ ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ನಗರದ ಜಾಳಹಳ್ಳಹುಂಡಿ ರಸ್ತೆಯಲ್ಲಿ ರೈತ ಸಂಘದ ಮಹೇಶ್, ಹೆಗ್ಗವಾಡಿಪುರ ಮಹೇಶ್ ನೇತೃತ್ವದಲ್ಲಿ ರಸ್ತೆ ತಡೆದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ‌ಆಕ್ರೋಶ ಹೊರಹಾಕಿದರು. ಗ್ರೇಟರ್ ಬೆಂಗಳೂರು ಮಾಡುವ ನೆಪದಲ್ಲಿ ಸುಮಾರು 9500 ಎಕರೆ ಫಲವತ್ತಾದ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸುತಿದ್ದಾಗ ಡಿಕೆಶಿ ವರ್ತನೆ ಖಂಡನೀಯ ಎಂದರು.
Read More News
T & CPrivacy PolicyContact Us