ಕಲಬುರಗಿ : ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರು ಹಿಡಿದು ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಸೈಬರ್ ವಂಚಕರಿಂದ ವಂಚನೆ ಎಸಗುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗ್ತಾನೆ ಇವೆ. ಅದರಂತೆ ಕಲಬುರಗಿ ನಗರದ ಬಡೇಪುರ ಕಾಲೋನಿಯ ಪಾನಿಪುರಿ ವ್ಯಾಪಾರಿಯೊಬ್ಬನಿಗೆ ಸೈಬರ್ ವಂಚಕರು ₹3.93 ಲಕ್ಷ ರೂಪಾಯಿ ವಂಚಿಸಿದ ಘಟನೆ ನಡೆದಿದ್ದು, ಆ26 ರಂದು ರಾತ್ರಿ 7 ಗಂಟೆಗೆ ಮಾಹಿತಿ ಲಭ್ಯವಾಗಿದೆ. ಪಿಎಮ್ ಕಿಸಾನ್ ಯೋಜನೆಯ ಲಿಂಕ್ನ್ನ ಅಪ್ಪಾರಾವ್ ಸೋಪುರೆರ ಮೊಬೈಲ್ಗೆ ಕಳುಹಿಸಿದ್ದು, ಬಳಿಕ ಅನೇಕ ಓಟಿಪಿಗಳನ್ನ ಪಡೆದು ಮೊಬೈಲ್ ಹ್ಯಾಕ್ ಮಾಡಿ ಅಕೌಂಟ್ನಲ್ಲಿನ ಲಕ್ಷಾಂತರ ರೂ ಹಣವನ್ನ ವಂಚಿಸಿದ್ದಾರೆ.