Download Now Banner

This browser does not support the video element.

ಕಂಪ್ಲಿ: ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಗೆ ಎಸ್ಪಿ ಶೋಭಾರಾಣಿ ಭೇಟಿ, ಬಿಗಿ ಬಂದೋಬಸ್ತ್ ವೀಕ್ಷಣೆ

Kampli, Ballari | Sep 9, 2025
ಕಂಪ್ಲಿ ಪಟ್ಟಣದಲ್ಲಿ ನಿನ್ನೆ ರಾತ್ರಿ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಯು ವಿಜೃಂಭಣೆಯಿಂದ ಜರುಗಿತು.ಮೆರವಣಿಗೆಯ ಹಿನ್ನೆಲೆ ಜಿಲ್ಲೆಯ ಡಿವೈಎಸ್ಪಿ, ಸಿಪಿಐ, ಪಿಎಸ್ಐ ಸೇರಿದಂತೆ 400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳ ನಿಯೋಜಿಸಲಾಗಿತ್ತು. ನಗರದಲ್ಲಿ ಕಟ್ಟು ನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.ಸೆಪ್ಟೆಂಬರ್ 8, ಸೋಮವಾರ ರಾತ್ರಿ 10:30 ಗಂಟೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಶೋಭಾರಾಣಿ ಸ್ವತಃ ಕಂಪ್ಲಿಗೆ ಭೇಟಿ ನೀಡಿ, ಬಂದೋಬಸ್ತ್ ಪರಿಶೀಲಿಸಿದರು. ನಗರದ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಒಟ್ಟಾರೆ, ನಿನ್ನೆ ನಡೆದ ಮೆರವಣಿಗೆಯು ಯಾವುದೇ ಅಹಿತಕರ ಘಟನೆ ಸಂಭವಿಸದೆ ಶಾಂತಿಯುತವಾಗಿ ಸಂಪನ್ನವಾಯಿತು.
Read More News
T & CPrivacy PolicyContact Us