ಕಲಬುರಗಿ : ಕಲಬುರಗಿ ತಾಲೂಕಿನ ಸೀತನೂರು ಗ್ರಾಮದಲ್ಲಿ ಶಿವರಾಯ್ ಮಾಲೀಪಾಟೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, 2008 ರಲ್ಲಿ ಅಕ್ರಮ ಸಂಬಂಧ ವಿಚಾರಕ್ಕೆ ನಾಗೇಂದ್ರನ ಕೊಲೆ ನಡೆದಿತ್ತು ಅಂತಾ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ ಶರಣಪ್ಪ ಹೇಳಿದ್ದಾರೆ. ಸೆ1 ಮಧ್ಯಾನ 2 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ನಾಗೇಂದ್ರನ ಅತ್ತಿಗೆ ಜೊತೆ ಶಿವರಾಯ್ ಮಾಲೀಪಾಟೀಲ್ ಅನೈತಿಕ ಸಂಬಂಧ ಹೊಂದಿದ್ದ.. ಆದರೆ ಇಬ್ಬರ ಸಂಬಂಧಕ್ಕೆ ನಾಗೇಂದ್ರ ಅಡ್ಡಿಯಾಗಿದ್ದನ್ನ ಸಹಿಸದ ಶಿವರಾಯ್ ಮಾಲೀಪಾಟೀಲ್, ನಾಗೇಂದ್ರನನ್ನ ಕೊಲೆ ಮಾಡಿದ್ದನೆಂದು ಡಾ ಶರಣಪ್ಪ ಹೇಳಿದ್ದಾರೆ.