Download Now Banner

This browser does not support the video element.

ಯಳಂದೂರು: ಮಲಾರಪಾಳ್ಯದಲ್ಲಿ‌ ವೈಯಕ್ತಿಕ ದ್ವೇಷಕ್ಕೆ ಹೊತ್ತಿ ಉರಿದ ಕಬ್ಬಿನ ಗದ್ದೆ

Yelandur, Chamarajnagar | Aug 22, 2025
ವೈಯಕ್ತಿಕ ದ್ವೇಷಕ್ಕೆ ಕಬ್ಬಿನ ಗದ್ದೆ ಹೊತ್ತಿ ಉರಿದ ಘಟನೆ ಯಳಂದೂರು ತಾಲೂಕಿನ ಮಲಾರಪಾಳ್ಯದಲ್ಲಿ ನಡೆದಿದೆ. ದೊರೆಸ್ವಾಮಿ ಎಂಬುವವರಿಗೆ ಸೇರಿದ ಜಮೀನಿಗೆ ಬೆಂಕಿ ಬಿದ್ದಿದ್ದು ವೈಯಕ್ತಿಕ ದ್ವೇಷಕ್ಕೆ ತನ್ನ ಜಮೀನಿಗೆ ಬೆಂಕಿ ಹಾಕಿದ್ದಾರೆ ಎಂದು ದೊರೆಸ್ವಾಮಿ ಆರೋಪಿಸಿದ್ದಾರೆ. ಒಂದೂವರೆ ಎಕರೆ ಪ್ರದೇಶದಲ್ಲಿ ಕಟಾವಿನ ಹಂತಕ್ಕೆ ಬಂದಿದ್ದ ಕಬ್ಬು ಸುಟ್ಟು ಕರಕಲಾಗಿದ್ದು 60-70 ಟನ್ ನಷ್ಟು ಕಬ್ಬು ಇದಾಗಿದೆ ಎಂದು ದೊರೆಸ್ವಾಮಿ ಹೇಳಿದ್ದಾರೆ. ಯಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Read More News
T & CPrivacy PolicyContact Us