Download Now Banner

This browser does not support the video element.

ರಾಯಚೂರು: ನಗರದಲ್ಲಿ ಹೃದಯಾಘಾತಕ್ಕೆ ಮತ್ತೊಬ್ಬ ಯುವಕ ಬಲಿ; ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯೆ ಕೊನೆಯುಸಿರು

Raichur, Raichur | Sep 2, 2025
ಐದನೇ ದಿನ ಗಣಪತಿ ವಿಸರ್ಜನೆ ವೇಳೆ ಮೆರವಣಿಗೆಯಲ್ಲಿ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ ಯುವಕ ಹೃದಯಘಾತಕ್ಕೆ ಬಲಿಯಾಗಿರುವುದು ಘಟನೆ ರಾಯಚೂರು ನಗರದಲ್ಲಿ ವರದಿಯಾಗಿದೆ. ನಗರದ ಕುಲಸುಂಬಿ ಕಾಲೋನಿಯ ನಿವಾಸಿ ಆಂಜನೇಯ (35) ಹೃದಯಾಘಾತಕ್ಕೆ ಬಲಿಯಾದ ದುರ್ದೈವಿ. ಆಗಸ್ಟ್ 31 ರ ರವಿವಾರ ತಡರಾತ್ರಿ ಕುಣಿದಾಡಿದ ಯುವಕನಿಗೆ ತೀವ್ರ ಆಯಾಸವಾಗಿತ್ತು, ನಂತರ ಮನೆಗೆ ಹೋಗಿ ವಿಶ್ರಾಂತಿ ಪಡೆದಿದ್ದರು‌. ಆದರೆ ಸೆ.1 ರ ಸೋಮವಾರ ಬೆಳಗಿನ ಜಾವ ಐದು ಗಂಟೆಗೆ ತೀವ್ರ ಆಯಾಸವಾದ ಕಾರಣ ಸ್ಥಳೀಯ ಆಸ್ಪತ್ರೆಗೆ ಹೊರಡುವ ಮಾರ್ಗಮಧ್ಯ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಮೃತನಿಗೆ ಇಬ್ಬರು ಪುತ್ರಿ, ಓರ್ವ ಪುತ್ರನಿದ್ದ ಎನ್ನಲಾಗಿದೆ.
Read More News
T & CPrivacy PolicyContact Us